Friday, December 17, 2010

ಶ್ರೀ ರಾಮ ಹೃದಯಂ

*********************************************************
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
*********************************************************
ಶ್ರೀ ಮಹದೇವ ಉವಾಚ:-

ತತೋ ರಾಮಃ ಸ್ವಯಂ ಪ್ರಾಹ ಹನುಮಂತ ಮುಪಸ್ಥಿತಂ |
ಶೃಣು ತತ್ವಂ ಪ್ರಾವಕ್ಷ್ಯಾಮಿ ಹ್ಯಾತ್ಮಾನಾತ್ಮ ಪರಾತ್ಮ ನಾಮ್. ||

ಆಕಾಶಸ್ಯ ಯಥಾ ಭೇಧಸ್ತ್ರಿವಿಧೋ ದೃಶ್ಯತೇ ಮಹಾನ್
ಜಲಾಶಯೇ ಮಹಾಕಾಶಸ್ತದವಚಿನ್ನ ಏವ ಹಿ |
ಪ್ರತಿ ಬಿಂಬಾಖ್ಯಮಪರಂ ದೃಶ್ಯತೇ ತ್ರಿವಿಧಾಂ ನಭಃ |
ಬುಧ್ಯವಚ್ಛಿನ್ನ ಚೈತನ್ಯ ಮೇಕಂ ಪೂರ್ಣ೦ ಯಥಾ ಪರಮ್ ||

ಆಭಾಸಸ್ತ್ವಪರಂ ಬಿಂಬಭೂತಮೇವಂ ತ್ರಿಧಾ ಚಿತಿಃ |
ಸಾಭಾಸಬುದ್ಧೇಃ ಕರ್ತೃತ್ವಮವಿಚಿನ್ನೇS ವೀಕಾರಿಣೀ ||

ಸಾಕ್ಷಿಣ್ಯಾರೋಪ್ಯತೇ ಭ್ರಾಂತ್ಯಾ ಜೀವತ್ವಂ ಚ ತಥಾ ಬುಧೈ |
ಆಭಾಸಸ್ತು ಮೃಷಾ ಬುದ್ಧಿರ ವಿದ್ಯಾ ಕಾರ್ಯಮುಚ್ಯತೇ ||

ಅವಿಚ್ಛಿನ್ನಮ್ ತು ತದ್ಬ್ರಹ್ಮ ವಿಚ್ಛೇದಸ್ತು ವಿಕಲ್ಪಿತ |
ಅವಿಚ್ಛಿನ್ನಸ್ಯ ಪೂರ್ಣೇನಾ ಏಕತ್ವಂ ಪ್ರತಿಪಧ್ಯತೇ ||

ತತ್ವಮಸ್ಯಾದಿ ವಾಕ್ಯೈಶ್ಚ ಸಾಭಾ ಸಸ್ಯಾಹಮಸ್ತಥಾ |
ಐಕ್ಯ ಜ್ಞಾನಮ್ ಯದೋತ್ಪನ್ನಂ , ಮಹಾ ವಾಕ್ಯೇನ ಚಾತ್ಮನೋಃ ||

ತದಾS ವಿದ್ಯಾಸ್ವಕಾರ್ಯೈಶ್ಚ ನಶ್ಯತ್ಯೇಪನ ಸಂಶಯಃ |
ಏತದ್ವಿಜ್ಞಾಯ ಮದ್ಭಕ್ತೋ ಮಾದ್ಭಾವಾಯೋಪಪದ್ಯತೇ ||

ಮದ್ಭಕ್ತಿ ವಿಮುಖಾನಂ ಹಿ ಶಾಸ್ತ್ರ ಗರ್ತೇಷು ಮುಹ್ಯತಾಮ್ |
ನ ಜ್ಞಾನಮ್ ನ ಮೋಕ್ಷ ಸ್ಯಾತ್ ತ್ತೇಷಾ೦ ಜನ್ಮಶತೈರಪಿ ||

ಇದಂ ರಹಸ್ಯಂ ಹೃದಯಂ ಮಮಾತ್ಮನೋ
ಮಯೈವ ಸಾಕ್ಷಾತ್ ಕಥಿತಂ ತವಾನಘ |
ಮದ್ಭಕ್ತಿ ಹೀನಾಯ ಶಠಾಯ ನ ತ್ವಯಾ
ದಾತವ್ಯಮೈ೦ದ್ರಾದಪಿ ರಾಜ್ಯತೋSದಿಕಂ ||

|| ಇತಿ ಶ್ರೀ ಮದಧ್ಯಾತ್ಮ ರಾಮಾಯಣೇ ಬಾಲಕಾಂಡೇ ಶ್ರೀ ರಾಮ ಹೃದಯಂ ||

Thursday, November 4, 2010

$ ಶ್ರೀ ರಾಮ ಪ್ರಾತಃ ಸ್ಮರಣಮ್ $

|| ಶ್ರೀರಸ್ತು ||
|| ಶ್ರೀ ರಾಮ ಸಮರ್ಥ ||

$ ಶ್ರೀ ರಾಮ ಪ್ರಾತಃ ಸ್ಮರಣಮ್ $

===============================


ಪ್ರಾತಃ ಸ್ಮರಾಮಿ ರಘುನಾಥ ಮುಖರವಿಂದಂ ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ |
ಕರ್ಣಾವಾಲಂಬಿ ಚಲ ಕಂಡಲಶೋಭಿಗಂಡಂ ಕರ್ಣಾ೦ತದೀರ್ಘನಯನಂ ನಯನಾಭಿರಾಮಮ್ || 1 ||

ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ ರಕ್ಷೋಗಣಾಯ ಭಯದಂ ವರದಂ ನಿಜೇಭ್ಯಃ |
ಯಧ್ ರಾಜಸಂಸಧಿ ವಿಭಿಧ್ಯ ಮಹೇಷಚಾಪಮ್ ಸೀತಾಕರಗ್ರಹಣಮಂಗಲಮಾಪಸದ್ಯಃ || 2 ||

ಪ್ರಾತರ್ನಮಾಮಿ ರಘುನಾಥಪದಾರವಿಂದಂ ಪದ್ಮಾಂಕುಶಾದಿ ಶುಭರೇಖಿ ಸುಖಾವಹಂ ಮೇ |
ಯೋಗೀ೦ದ್ರ ಮಾನಸ ಮಧುವ್ರತಸೇವ್ಯಮಾನ೦ ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || 3 ||

ಪ್ರಾತರ್ವದಾಮಿ ವಚಸಾ ರಘುನಾಥನಾಮ ವಾಗ್ದೋಷಹಾರಿ ಸಕಲಂ ಕಮಲಂ ಕರೋತಿ |
ಯತ್ ಪಾರ್ವತೀ ಸ್ವಪತಿನಾ ಸಹಭೋಕ್ತುಕಾಮಾ ಪ್ರೀತ್ಯಾ ಸಹಸ್ರ ಹರಿನಾಮಸಮ೦ ಜಜಾಪ || 4 ||

ಪ್ರಾತಃಶ್ರಯೇ ಶ್ರುತಿನುತಾ೦ ರಘುನಾಥಮೂರ್ತಿ೦ ನೀಲಾಂಬುಜೋತ್ಪಲ ಸಿತೇತರರತ್ನನೀಲಾಮ್ |
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಡ್ಯಾ೦ ದ್ಯೇಯಾ೦ ಸಮಸ್ತಮುನಿಭಿರ್ಜನ ಮುಕ್ತಿ ಹೇತುಮ್ || 5 ||

ಯಃ ಶ್ಲೋಕ ಪಂಚಕಮಿದಂ ಪ್ರಯತಃ ಪಠೇತ್ತು ನಿತ್ಯಂ ಪ್ರಭಾತಸಮಯೇ ಪುರುಷಃ ಪ್ರಬುದ್ಧಃ |
ಶ್ರೀರಾಮ ಕಿಂಕರ ಜನೇಷು ಏವ ಮುಖ್ಯೋ ಭೂತ್ವಾ ಪ್ರಯಾಸಿ ಹರಿಲೋಕವನನ್ಯಲಭ್ಯಮ್ || 6 ||

Wednesday, October 27, 2010

ಮಾಘ ಮಳೆ ನೆನೆಯೇ ರಾಮನ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ಬರದ ಬಾಳಿಗೆ ಹಸಿರನೀಯ ಬಾರದೆ
ಆರಿದ ಹೃದಯಕೆ ಅಮೃತನೀಯ ಬಾರದೆ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ಹರುಷದ ಸ್ಪರ್ಶದಿ ಭೂಮಿ ಮಿಂದಳು
ಹೊಸದಾದ ಸುಮಧುರ ಸುವಾಸನೆ ಬೀರಿಹಳು

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ನೀಲಿ ಕಂಗಳ ಕಣ್ಣೀರಿನಿಂದ ನಮ್ಮ ನೆನೆದೆ
ನನ್ನ ಪ್ರೀತಿಯ ರಾಮನ ಒಮ್ಮೆ ನೆನೆಯ ಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ತುಂತುರು ಹನಿಗಳ ಮಧುರ ಮಾಲೆಯ ಹೆಣೆದೆ
ನನ್ನ ಪ್ರೀತಿಯ ರಾಮನಿಗೆ ಆ ಮಾಲೆ ಸಿಂಗರಿಸಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

Sunday, August 8, 2010

ನೆನೆಯೆ ರಾಮ ನಾಮವಾ

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ನಾನು ಎಂಬ ರಾಗದಲ್ಲಿ
ತಾಳ ತಂತಿ ಹರಿಯಿತಲ್ಲ
ಕರಗಿ ಕರಗಿ ಹೋಯಿತಲ್ಲ
ಆಯು ಎಂಬ ಮಾಯೆಯು ..

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ಸಂತನಂತೆ ಬಂದೆ ಇಲ್ಲಿ
ಸಂತೆಯಲ್ಲಿ ಕಳೆದೆನಾ
ಮಧುರ ಭಾವ ಬೆಳೆಯಲಿಲ್ಲ
ಕ್ಷಮಿಸು ನಿನ್ನ ನೆನಯಲಿಲ್ಲ ..

Monday, March 22, 2010

ದೇವರು

ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ. ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ.


ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು.


ನಿನಗೆ ಎಷ್ಟು ಜನ ಪರಿಚಯ?


ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦ ಜನ ಎಂದ.


೧೦೦೦೦ ಜನಗಳ ಬಿಟ್ಟು ಬೇರೆ ಜನಗಳೇ ಗೊತ್ತಿಲ್ಲ ನಿನಗೆ. ಆದಿ ಕಾಲದಿಂದಲೂ ಕೋಟಿ ಕೋಟಿ ಜನ ನಂಬಿರುವ ದೇವರ ಬಗ್ಗೆ ಅನುಮಾನವಾ?... ಎಂದರು.


ಮತ್ತೊಂದು ಪ್ರಶ್ನೆ ಮುಂದಿಟ್ಟರು.


ನಿನ್ನ ಇರುವಿಕೆ ಹೇಗೆ ಸಮರ್ಥಿಸುವೆ ಎಂದು.


ನಾನು ನಿಮ್ಮ ಜೊತೆ ಮಾತನಾಡುತ್ತಿರುವೇನಲ್ಲ ಎಂದ.


ನೀನು ಹೇಗೆ ಧರೆಗೆ ಬಂದೆ.


ನನ್ನ ತಂದೆ ಮತ್ತು ತಾಯಿಗಳಿಂದ.


ಹಾಗೆ ನಿನ್ನ ತಂದೆ ಇರುವಿಕೆ ಸಮರ್ಥಿಸು ಎಂದರು.


ನನ್ನ ಅಜ್ಜ ಮತ್ತು ಅಜ್ಜಿ ಎಂದ.


ಮತ್ತೆ ನಿಮ್ಮ ಅಜ್ಜನ ಇರುವಿಕೆ ಸಮರ್ಥಿಸು ಎಂದರು.


ಅವನು ಮತ್ತೆ ಮುತ್ತಜ್ಜ ಮಾತು ಮುತ್ತಜ್ಜಿ ಎಂದ.


ಹಾಗೆ ಮತ್ತೆ ಮುತ್ತಜ್ಜ ಇರುವಿಕೆ ಸಮರ್ಥಿಸು ಎಂದರು.


ಅವನು ಹಾಗೆ ಗಿರಿ ಮುತ್ತಜ್ಜ ಮತ್ತು ಗಿರಿ ಮತ್ತಜ್ಜಿ ಎಂದ..


ನಿನ್ನ ಗಿರಿ ಮುತ್ತಜ್ಜ ಇದ್ದ .. ಅಂತ ಹೇಗೆ ಹೇಳುವೆ ನೀನು ಹೇಳುವದೆಲ್ಲ ಸುಳ್ಳು ಎಂದರು .....ಈಗ ಅವರನ್ನು ತೋರಿಸು ಎಂದರು.


ಆಗ ಅವನ ತಪ್ಪಿನ ಅರಿವಾಗಿ ಆ ಸಾಧುಗಳ ಶಿಷ್ಯನಾಗಿ ಹೋದ.

ಶ್ರೀ ಗುರುವಾಣಿ

ಒಂದು ದಿವಸ ಗುರುಗಳ ಬಳಿ ಬಂದ ಒಬ್ಬ ಮನುಷ್ಯ. ಗುರುಗಳಿಗೆ ನಮಸ್ಕರಿಸಿ, ಗುರುಗಳೇ ನನಗೆ ದೇವರ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದ. ಆಗ ಗುರುಗಳು ಶಾಂತ ಚಿತ್ತದಿಂದ ಅವನಿಗೆ ತಮ್ಮ ಬಳಿ ಬರಮಾಡಿಕೊಂಡು, ನಿನ್ನ ಸಮಸ್ಯೆ ಏನು ಎಂದು ಕೇಳಿದರು. ಅದಕ್ಕೆ ನಾನು ದೇವರ ಬಗ್ಗೆ ತುಂಬಾ ನಂಬಿಕೆ ಇಟ್ಟು ಕೊಂಡಿದ್ದೆ. ದಿನವು ಪೂಜೆ ಮಾಡುತ್ತಿದ್ದೆ. ಒಮ್ಮೆ ನಾನು ಸೋಲಾಪುರದಲ್ಲಿ, ನನ್ನ ಒಬ್ಬ ಗೆಳೆಯನನ್ನು ಭೇಟಿ ಮಾಡಿದೆ. ಅವ ಆಗರ್ಭ ಶ್ರೀಮಂತ. ಅವನಿಗೆ ದೇವರ ಬಗ್ಗೆ ಸ್ವಲ್ಪ ಕೂಡ ನಂಬಿಕೆ ಇಲ್ಲ. ಆದರು ದೇವರು ಅವನಿಗೆ ಎಲ್ಲವನ್ನು ಕರುಣಿಸಿದ್ದಾನೆ. ನನಗೆ ಏಕೆ ಹೀಗೆ? ಎಂದು ಕೇಳಿದ. ಆಗ ಗುರುಗಳು ನೀನು ನಿನ್ನನ್ನು ಏಕೆ ಅವನ ಜೊತೆ ಏಕೆ ಹೊಂದಾಣಿಕೆ ಮಾಡಿ ಯೋಚಿಸುವೆ. ಅದು ಅವನು ಪಡೆದ ಕರ್ಮದ ಫಲ. ನಿನಗೆ ಏನು ಬೇಕು ಹೇಳು ನಾನು ನಿನಗೆ ಕೊಡಬಲ್ಲೆ ಎಂದರು. ಆಗ ಆ ವ್ಯಕ್ತಿ ತುಂಬಾ ಯೋಚನಗೆ ಬಿದ್ದ. ತುಂಬಾ ಹೊತ್ತು ಯೋಚಿಸಿ ಗಲಿಬಿಲಿಗೊಂಡು ಕಡೆಗೆ ನನಗೆ 10 ಕೋಟಿ ರೂಪಾಯಿಗಳು ಬೇಕು. ಆಗ ಗುರುಗಳು ಆಯಿತು ಕೊಡುತ್ತೇನೆ. ಆದರೆ ನೀನು ಶ್ರೀ ರಾಮ ನಾಮಸ್ಮರಣೆ ಮಾಡುತ್ತ ಕೆಲ ದಿನ ಇಲ್ಲಿ ಉಳಿದು ಕೊಳ್ಳಬೇಕು ಎಂದರು. ಮತ್ತೆ ಎರಡು ದಿವಸ ಆದ ಮೇಲೆ ಆ ಮನುಷ್ಯ ನನಗೆ 20 ಕೋಟಿ ಬೇಕು ಎಂದ. ಮತ್ತೆ ಆಯಿತು ಎಂದರು ಗುರುಗಳು. ದಿನವು ನಾಮಸ್ಮರಣೆ, ಭಜನೆ ಮಾಡುತ್ತ ಒಂದು ತಿಂಗಳು ಕಳೆದವು. ಆ ಮನುಷ್ಯ ತುಂಬಾ ಕೋಪಗೊಂಡು ಒಂದು ದಿವಸ ನಾಮಸ್ಮರಣೆಗೆ ಬರಲಿಲ್ಲ. ಆಗ ಗುರುಗಳು ಎಲ್ಲಿ ಆ ಮನುಷ್ಯ ಎಂದು ಶಿಷ್ಯರನ್ನು ಕೇಳಿದರು. ಆಗ ಶಿಷ್ಯರು ಅವರು 20 ಕೋಟಿ ರುಪಾಯಿ ಸಿಗುವವರೆಗೂ ಅವರು ಬರುವದಿಲ್ಲವಂತೆ ಎಂದು ಹೇಳಿದರು. ಆಗ ಗುರುಗಳು ಅವರ ಬಳಿ ಹೋಗಿ, ಇಂದಿನ ನಾಮಸ್ಮರಣೆ, ಭಜನೆ, ಪ್ರಸಾದ ಆದ ಮೇಲೆ ನಿಮಗೆ ಒಂದು ಕೊಡುವೆ ಎಂದು ಹೇಳಿದರು. ಪ್ರಸಾದವಾದ ಬಳಿಕ ಗುರುಗಳು ಅವನನ್ನು ಕರೆದುಕೊಂಡು ಹೋಗಿ ನೋಡು ಇಲ್ಲಿದೆ ನಿನ್ನ ದುಡ್ಡು ಎಂದು ತೋರಿಸಿದರು. ಆಗ ಆ ಮನುಷ್ಯ ತುಂಬಾ ಸಂತೋಷಗೊಂಡ. ಮತ್ತು ಕೆಲವೇ ನಿಮಿಷದಲ್ಲಿ ಮತ್ತೆ ಚಿಂತೆಯಲ್ಲಿ ಮುಳುಗಿದ. ಆಗ ಗುರುಗಳು ನಿನಗೆ ನಿನ್ನ ಮೇಲೆ ಭರವಸೆ ಇಲ್ಲ ಎಂದರು. ನೀನು ಕೇಳಿದ್ದು 10 ಕೋಟಿ, ಮತ್ತೆ 2 ದಿವಸ ಆದ ಮೇಲೆ 20 ಕೋಟಿ ಬೇಕು ಎಂದೇ. ನಾನು ಅದನ್ನೇ ನಿನಗೆ ಕೊಟ್ಟಿರುವೆ. ಆದರು ನಿನ್ನ ಚಹರೆ ಮೇಲೆ ಚಿಂತೆಯ ಛಾಯೆ ಇದೆ. ದೇವರು ಅವನ ಯೋಗ್ಯತೆ ತಕ್ಕಂತೆ ಅವನಿಗೆ ಎಲ್ಲವನ್ನು ಕರುಣಿಸಿದ್ದಾನೆ. ಆದರೂ ನಮ್ಮ ದುರಾಸೆಯ ಛಾಯೆ ಬಿಡುವದಿಲ್ಲ. ನಿನ್ನ ಗೆಳೆಯನಿಗೆ ದೇವರ ಮೇಲೆ ನಂಬಿಕೆ ಇಲ್ಲದಿದ್ದರೂ ಅವನಿಗೆ ಅಷ್ಟು ಶ್ರೀಮಂತಿಕೆ ಬಂದಿದ್ದು ನಿನಗೆ ಸಹಿಸಿ ಕೊಳ್ಳಲಾಗಲಿಲ್ಲ. ಮೊದಲು ನಿನಗೆ ಬೇಕಾಗಿದ್ದು ಮನಶಾಂತಿ. ಇಷ್ಟಾದರೂ ನಿನಗೆ ದುಡ್ಡು ಬೇಕೆಂದರೆ ನೀನು ಧಾರಾಳವಾಗಿ ತೆಗೆದುಕೊಂಡು ಹೋಗು ಎಂದರು. ಆಗ ಆ ಮನುಷ್ಯ ಆ ದುಡ್ಡನ್ನು ತೆಗೆದು ಕೊಂಡು ಹೋಗಲು ಆಲೋಚಿಸಿ, ಬೇಕಾಗುವ ಬಂಡಿಗಳನ್ನು ಲೆಕ್ಕ ಹಾಕತೊಡಗಿದ. ಮತ್ತೆ ದಾರಿಯಲ್ಲಿ ಎಂದರು ಕಳ್ಳತನ ವಾದರೆ ಎಂಬ ಭಯ ಬೇರೆ ಕಾಡ ತೊಡಗಿತು. ಆಗ ಆ ಮನುಷ್ಯ ನನಗೆ ಈ ಎರಡು ಕೋಟಿ ಗಿಂತ ನಿಮ್ಮ ಸಾನಿಧ್ಯ ಮತ್ತು ಮನಃ ಶಾಂತಿ ಬೇಕೆಂದು ಹೇಳಿ ಗುರುಗಳ ಶಿಷ್ಯನಾಗಿ ನಾಮಸ್ಮರಣೆ ಮಾಡುತ್ತ ಉಳಿದುಕೊಂಡ.

Tuesday, January 5, 2010

ಹರಿಯ ಮಂದಿರ ಹನುಮ ಹೃದಯ

(ಮೊದಲ ಬಾರಿ ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದು ಏನಾದರೂ ತಪ್ಪಿದ್ದರೆ ತಿಳಿಸಿ.)

ಹರಿಯ ಮಂದಿರ ಹನುಮ ಹೃದಯ
ರಾಮ ಚಂದಿರ ಒಲಿದ ಹೃದಯ
ಸೀತೆಯ ಹುಡುಕಿದ ರಾಮ ಚಂದ್ರ ಪ್ರೀತಿಗಳೆಸು ತಾ
ಹರಿಯ ಕೀರ್ತಿಯ ಜಗಕೆ ಸಾರಿದೆ
ರಾಮ ಮಂತ್ರವ ಶ್ರೇಷ್ಠ ವೆಂದೆ
ನಾಮ ಮಾತ್ರದಿ ಶನಿಯ ಕಾಟದಿ ನಿ ಕಾಪಾಡುತಾ